Oppanna.com

ಶೇಡಿಗುಮ್ಮೆ ಗೋಪಾಲಣ್ಣಂಗೆ ಬೈಲಿಂಗೆ ಸ್ವಾಗತ

ಬರದೋರು :   ಶುದ್ದಿಕ್ಕಾರ°    on   15/12/2010    9 ಒಪ್ಪಂಗೊ

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು.
ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು.
( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat )

ಹ್ಮ್, ಅಪ್ಪು.
ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು.
ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ.
ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು.
ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ.
ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು!

ಶೇಡಿಗುಮ್ಮೆ ಗೋಪಾಲಣ್ಣ, ಶುದ್ದಿ ಹೇಳುವ ಮೊದಲು ಗಂಭೀರ ಇಪ್ಪದು!

ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ.
ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ?
ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ.
ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು!

ಇದಾ, ಗೋಪಾಲಣ್ಣನ ಶುದ್ದಿಗೊ ಇನ್ನು ಬಪ್ಪಲೆ ಸುರು ಆವುತ್ತು.
ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°.
ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

ಗೋಪಾಲಣ್ಣಾ, ನಿಂಗೊಗೆ ಬೈಲಿಂಗೆ ಸ್ವಾಗತ!
~
ಒಪ್ಪಣ್ಣ

ಶ್ರೀ ಶೇಡಿಗುಮ್ಮೆ ಗೋಪಾಲಕೃಷ್ಣಭಟ್, ನಮ್ಮೆಲ್ಲರ ಗೋಪಾಲಣ್ಣ ಆಗಿ ನವಗೆ ಶುದ್ದಿ ಹೇಳ್ತವು.
ಅವರ ಮೋರೆಪುಟದ ಸಂಕೊಲೆ ಇಲ್ಲಿದ್ದು: http://www.facebook.com/profile.php?id=100001634774668
ಅವರ ಶುದ್ದಿಗೊ ಸದ್ಯಲ್ಲೇ ಸುರು ಆವುತ್ತು, ಕಾದೊಂಡಿರಿ!
~
ಗುರಿಕ್ಕಾರ°

9 thoughts on “ಶೇಡಿಗುಮ್ಮೆ ಗೋಪಾಲಣ್ಣಂಗೆ ಬೈಲಿಂಗೆ ಸ್ವಾಗತ

  1. ಒಪ್ಪಣ್ಣ ಹೇಳಿದ ಹಾಂಗೆ ಬಂದದರ ಸ್ವಾಭಾವಿಕ ಹೇಳುವ ಹಾಂಗೆ ಸ್ವೀಕರಿಸಿ, ಸ್ವಂತವಾಗಿಯೇ ಉದ್ಯೋಗ ಪಡದು, ಸಾಹಿತ್ಯಲ್ಲಿಯೂ ಬೆಳದು, ಇನ್ನೊಬ್ಬಂಗೆ ಪ್ರೇರಣೆ ಅಪ್ಪ ಹಾಂಗೆ ಸಾಧನೆ ಮಾಡಿ ತೋರ್ಸಿದ ಗೋಪಾಲಣ್ಣ ನಿಂಗೊಗೆ ಬೈಲಿಂಗೆ ಸ್ವಾಗತ. ಶರ್ಮಪ್ಪಚ್ಚಿ ನಿಂಗಳ ಬಗ್ಗೆ ಈಗಾಗಲೇ ಹೇಳಿದ ಕಾರಣ ನಿಂಗ ಬೈಲಿಂಗೆ ಬಪ್ಪದರಲ್ಲಿ ಸಂತೋಷ ಇದ್ದು. ಒಳ್ಳೆ ಲೇಖನಂಗ ಬರಲಿ ನಿಂಗಳಿಂದ..

  2. ಗೋಪಾಲಣ್ಣಂಗೆ ಬೈಲಿಂಗೆ ಸ್ವಾಗತ…….ಎಂಗೊ ಸಣ್ಣಾದಿಪ್ಪಗ ಆಕಾಶ ತೋರ್ಸಿಗೊಂಡು ನಕ್ಶತ್ರಂಗಳ ಗುರ್ತ ಹೇಳುಗು ಈ ಗೋಪಾಲಣ್ಣ……….ಆ ಸುದ್ದಿ ಎಲ್ಲಾ ಬಕ್ಕು ಹೇಳಿ ಗ್ರೇಶುತ್ತೆ…………

  3. ಎಲ್ಲರ ಹಾರೈಕೆಗೆ ಎನ್ನ ಧನ್ಯವಾದ.
    ಆನು ಇಷ್ಟು ವರ್ಷ ನಮ್ಮ ಭಾಷೇಲಿ ಬರದ್ದಿಲ್ಲೇ.ನಮ್ಮ ಭಾಷೇಲಿ ಬರವದು ಕಷ್ಟ ಹೇಳಿ ಎನ್ನ ವಿಚಾರ ಇತ್ತು.ಇದುಸುಲಭ ಹೇಳಿ ಎನಗೆ ಈ ಬ್ಲಾಗ್ ನೋಡಿದ ಮೇಲೆ ,ಶರ್ಮಣ್ಣನ ಮೂಲಕ ಗೊಂತಾತು.
    ಬರೆವ ಪ್ರಯತ್ನ ಖಂಡಿತ ಮಾಡ್ತೆ .ನಿಂಗಳ ನಿರೀಕ್ಷೆಗೆ ತಕ್ಕಂತೆ ಬರೆವ ಶಕ್ತಿ ದೇವರು ಕೊಡಲಿ.ಹೇಳಿ ಎನ್ನ ಪ್ರಾರ್ಥನೆ.

  4. ಗೋಪಾಲಣ್ಣ,ಆತ್ಮೀಯ ಸ್ವಾಗತ.ಬನ್ನಿ ಬರೆಯಿ.ನಿಂಗಳ ಬರಹ ಬೈಲಿನ ಹೊಸ ಎತ್ತರಕ್ಕೆ ಏರುಸಲಿ.

  5. ಗೋಪಾಲಂಗೆ ಆತ್ಮೀಯ ಸ್ವಾಗತ.

  6. ಎನ್ನ ಬ೦ದುವೂ ಆತ್ಮೀಯ ಗೆಳೆಯನೂ ಆದ ಗೋಪಾಲಣ್ಣ೦ಗೆ ಆತ್ಮೀಯ ಸ್ವಾಗತ.ಒಪ್ಪ೦ಗಳೊಟ್ಟಿ೦ಗೆ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×