“ನಿನಗೊಂದು ವಿಷಯ ಗೊಂತಿದ್ದಾ? ನಮ್ಮ ಮೇಗಣ ಮನೆ ನಾರಾಯಣ ಮಾವನ ಮಗ ಶಂಕ್ರ ಇಲ್ಲೆಯಾ? ಅಂವ ಕೊಂಕಣಿ ಕೂಸಿನ ಮದುವೆ ಆವ್ತ ಇದ್ದ.”
ಮನೆಂದ ಸುಮನಂಗೆ ಫೋನು ಬಂದಪ್ಪಗ ಅಮ್ಮ ಹೇಳಿದ ಪಷ್ಟು ಸುದ್ದಿಯೇ ಅದು.
“ಕೂಸು ಬೇರೆ ಆರು ಅಲ್ಲ, ಅಂಗಡಿಯ ಗೋಪಾಲ ಕಿಣಿಗಳ ಮಗಳು ಸಂಧ್ಯಾಡ. ನಾಳ್ತು ೧೮ಕ್ಕೆ ಮದುವೆ. ಕಾಗದ ಇಂದು ಕೊಟ್ಟಿಕ್ಕಿ ಹೋಯ್ದವು”.. ಅಮ್ಮ ಬೇರೆ ಎಂಥ ಎಲ್ಲ ಹೇಳಿತ್ತು ಹೇಳಿ ಸುಮನಂಗೆ ಗೊಂತೆ ಆಯ್ದಿಲ್ಲೆ.
ಒಪ್ಪಣ್ಣ ಹೇಳಿದಹೇಳಿ ಬರವಲೆ ಶುರು ಮಾಡಿದ ಅಜ್ಜಕಾನ ಭಾವ | ಕೆಪ್ಪಣ್ಣ ಬರವಲೆ ಶುರು ಮಾಡಿರು ಬರೆತ್ತಾ ಇಲ್ಲೆ ಅಭಾವ || ಹೇಳಿ ನೀರ್ಕಜೆ ಅಪ್ಪಚ್ಚಿ ಚಿಕ್ಕಮ್ಮನತ್ರೆ ಹೇಳಿದ್ದವಡ ಹೇಳಿ ಪೆರ್ಲದಣ್ಣ ಮನೆಗೆ ಹೋಗಿಪ್ಪಗ ಹೇಳಿದ. ಎಂತ ಮಾಡುದು ಭಾವ, ಈ ಜೆಂಬ್ರಂಗ, ಒಟ್ಟಿಂಗೆ ಜಾಸ್ತಿ ಇತ್ತಿದಾ. ಮದ್ದು ಬಿಡುಲೂ ಜನ ಸಿಕ್ಕುದು ಕಷ್ಟ. ಬಟ್ಯ ಬತ್ತೆ ಹೇಳಿರೆ ಕೊರಗ್ಗ ತಪ್ಪುಸುತ್ತು. ಹಾಂಗೆ ಗಾಳಿ ಹಾಕುವ ಕೆಲಸವೂ ನವಗೆ ಬಂತಿದಾ. ಪೆರ್ಲದಣ್ಣನ ಬೇಟಿಗೆ ಬಂದರೆ ಎಡಪ್ಪಾಡಿ ಅಣ್ಣನ [...]
ನವಗೆಲ್ಲ ಗೊಂತಿಪ್ಪ ಹಾಂಗೆ ಹವ್ಯಕ ಸಮುದಾಯ ಮೂಲತ: ಕೃಷಿಯನ್ನೇ ನೆಚ್ಚಿಕೊಂಡಿದ್ದಂತಹ ಸಮುದಾಯ. ಕೃಷಿ ಜೊತೆಗೆ ಕೆಲವು ಜನ ಪೌರೋಹಿತ್ಯ, ಅಡಿಗೆ, ಅಂಗಡಿ ಮುಂಗಟ್ಟು ಇತ್ಯಾದಿಗೊ ಇದ್ದರುದೆ ಕೃಷಿ ಹೇಳ್ತು ಇದೆಲ್ಲದರೊಟ್ಟಿಂಗೆ ಇದ್ದೇ ಇತ್ತು. ಇದು ಪ್ರಾಕಿಲಿ ಇದ್ದ ವ್ಯವಸ್ಥೆ, ಈಗ ಈ ಪರಿಸ್ಥಿತಿ ಇಲ್ಲೆ. ಈ ನಿಟ್ಟಿಲಿ ಎನಗೆ ಕೆಲವು ವಿಷಯಂಗಳ ಹೇಳೆಕ್ಕು ಹೇಳಿ ಅನ್ಸಿತ್ತು. ಕೃಷಿ ಪರಿಸ್ಥಿತಿ ಎಂತಕ್ಕೆ ಈಗ ಹಾಳಾಯಿದು ಹೇಳಿ ಎಲ್ಲರಿಂಗೂ ಗೊಂತಿದ್ದು. ಅದನ್ನೇ ಪುನಾ ಪುನಾ ಹೇಳಿ ನಿಂಗಳ ತಲೆ ತಿಂತಿಲ್ಲೆ. [...]
ಒಪ್ಪಣ್ಣ ಹೇಳ್ತ ಹಾಂಗೆ ಈ ಜೆಂಬಾರಂಗಳ ಎಡೆಲಿ ಎಡಿಯಪ್ಪಾ ಎಡಿಯ.
ಸದ್ಯಕ್ಕೆ ಇನ್ನು ಯಾವುದೇ ಜೆಂಬಾರ ಇಲ್ಲೆ ಹೇಳಿ ಜಾನ್ಸಿರೆ, ಒಂದಲ್ಲ ಮೂರು ನಾಲ್ಕು ಒಟ್ಟಿಂಗೆ ಹೇಳಿಕೆ ಬಂದು ಕೂರುಗು. ಹೋಗದ್ದೆ ಗೊಂತಿದ್ದೋ?.
ಹೋದ ಮತ್ತೆ ಸುಮ್ಮನೆ ಕೂದು ಉಂಡಿಕ್ಕಿ ಬಪ್ಪದು ಮನಸ್ಸಿಂಗೆ ಹಿತ ಆವುತ್ತಿಲ್ಲೆ. ತಿಂದ ಉಪ್ಪಿನ ಋಣ ಆದರೂ ತೀರಿಸೆಕ್ಕಡ. ಹಸಿ ನೀರೋ, ಬೆಶಿ ನೀರೋ ಕೇಳುವದಾದರೆ ಸರ್ತಕ್ಕೆ ಒಂದರಿ ಹಂತಿಲಿ ಹೋಗಿಂಡು ಬಪ್ಪಲಕ್ಕು.
ಹೆಚ್ಚು ಬಗ್ಗುತ್ತ ಕೆಲಸ ಇಲ್ಲೆ. ಸಣ್ಣ ಸಣ್ಣ ಪಾತ್ರೆಗಳಲ್ಲಿ ತಾಳೋ, ಉಪ್ಪು, ಉಪ್ಪಿನ ಕಾಯಿಯೋ ಹಿಡ್ಕೊಂಡು ಹೆರಟರೂ ತೊಂದರೆ ಇಲ್ಲೆ. ಅದು ಬಿಟ್ಟು ಅಶನಕ್ಕೆ ಹಿಡಿವಲೆ ಹೆರಟರೆ ಮಾತ್ರ ಎನ್ನ ಹಾಂಗೆ ಬೆನ್ನು ಬಗ್ಗುಸಲೆ ಎಡಿಯದ್ದವಕ್ಕೆ ಬಙವೇ…
ನಮ್ಮ ಬೈಲಿಲ್ಲಿ ಈಗ ಪದ್ಯಂಗಳ ಸುಗ್ಗಿ ಇದಾ. ನೀರ್ಕಜೆ ಅಪ್ಪಚ್ಚಿ, ಚಿಕ್ಕಮ್ಮ, ನೆಗೆಗಾರ, ಅಜ್ಜಕಾನ ಬಾವ, ಯಬೋ!! ಎಂಥ ಗೌಜಿ, ಆ ಒಪ್ಪಂಗಳೋ.. ಒಂದಕ್ಕಿಂತ ಒಂದು ಮೀರ್ಸುತ್ತು… ಬೈಲಿಲ್ಲಿ ಎಲ್ಲರೂ ಕವಿಗ ಆಯಿದವನ್ನೇ ಹೇಳಿ ಅನುಸಿ ಹೋತು ಕೆಪ್ಪಣ್ಣಂಗೆ! ಆನೆಂತಕೆ ಟ್ರೈ ಮಾಡ್ಲಾಗ ಹೇಳಿ ಆತು.. ಆಲೋಚನೆ ಮಾಡುವಾಗ ಮನಸ್ಸಿಲಿ ಬಂದದು ಈ ಸಾಲುಗ.. ಸುಮ್ಮನೆ ಬೈಲಿಲ್ಲಿ ಗೀಚಿದ್ದೆ… ಹಾಂಗೆ ಒಂದರಿ ಕಣ್ಣು ಓಡಿಸಿ ಈ ಸಾಲಿಗಳ ಮೇಲೆ. ಜೀವನ ನಮ್ಮ ಜೀವನಲ್ಲಿ ಎಂತ ಇದ್ದು? ಕಷ್ಟ-ಸುಖ [...]